ಶೇಣಿ ಕಲೋತ್ಸವ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 31 , 2013
|
ಮಂಗಳೂರು , ಆಗಸ್ಟ್ 31 , 2013
|
ಶೇಣಿ ಕಲೋತ್ಸವ ಪ್ರಶಸ್ತಿ ಪ್ರದಾನ
ಮಂಗಳೂರು :
ಸಾಂಪ್ರದಾಯಿಕ ವೇಷಧಾರಿ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಮತ್ತು ಬಡಗು-ತೆಂಕು ತಿಟ್ಟಿನ ಸ್ತ್ರೀ ವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಅವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ `` ಶೇಣಿ ಸಂಸ್ಮರಣೆ ಕಲೋತ್ಸವ ಪ್ರಶಸ್ತಿ`` ನೀಡಿ ಗೌರವಿಸಲಾಯಿತು.
ಶುಕ್ರವಾರ ಪುರಭವನದಲ್ಲಿ ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶೇಣಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಪಿ. ಜಯರಾಮ ಹಂದೆ, ಎಲ್ಲ ಕಲೆಯಲ್ಲಿ ಅತ್ಯುತ್ತಮ ಕಲಾವಿದರು ಇರುತ್ತಾರೆ. ಆದರೆ, ಅವರನ್ನು ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿನ ಪ್ರತಿಭೆ ಹಾಗೂ ಕಲೆ ಮುಂದುವರಿಯಲು ಸಾಧ್ಯ ಎಂದರು. ಶೇಣಿ ಸಂಸ್ಮರಣೆ ಮಾಡಿದ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಕಲಾವಿದ ತನ್ನ ಹೆಸರು ಉಳಿಸಿಕೊಳ್ಳಲು ತನ್ನ ಶಿಷ್ಯರಿಂದ ಗಳಿಸಿದ ಕೀರ್ತಿಯೇ ಸಾಕು.
ಇವರ ಕೀರ್ತಿಯಿಂದ ಗುರು ತನ್ನ ಶೇಷ್ಠತೆಯನ್ನು ಗುರುತಿಸಿಕೊಳ್ಳುತ್ತಾನೆ. ಯಕ್ಷಗಾನದಲ್ಲಿ ಸರಿ ತಪ್ಪುಗಳ ವಿಮರ್ಶೆಯಾದಾಗ ಮಾತ್ರ ಅದು ಪ್ರಸಿದ್ಧಿ ಪಡೆಯಲು ಸಾಧ್ಯ ಎಂದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸತಿ ಪ್ರಭಾವತಿ(ಬಡಗು), ಊರ್ವಶಿ ಶಾಪ(ತೆಂಕು), ಮೀನಾಕ್ಷಿ ಕಲ್ಯಾಣ(ಬಡಗು) ತ್ರಿವಳಿ ಯಕ್ಷಗಾನ ಬಯಲಾಟ ನಡೆಯಿತು. ಯಕ್ಷಗಾನದಲ್ಲಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಕಥಾ ನಾಯಕಿ ಪಾತ್ರವನ್ನು ನಿರ್ವಹಿಸಿದರು. ಬಡಗುತಿಟ್ಟು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ವಿದ್ವಾಂಸ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೆರಾಜೆ ಇದ್ದರು.
|
|
|